ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಪೋಟ್ ಕಂಡುಬಂದಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಈ ದುರಂತದ ಮುನ್ನ ಕರ್ತವ್ಯದಲ್ಲಿದ್ದ ಸುಮಾರು 15 ಕಾರ್ಮಿಕರು ಚಹಾ ಕುಡಿಯಲೆಂದು ಹೊರ ಹೋಗಿದ್ದರು. ಯಾವುದೇ ಜೀವಹಾನಿ ಆಗಿಲ್ಲವೆಂದು ಖಚಿತವಾಗಿದೆ. ಇದನ್ನೂ ಓದಿ: Surat incident : ಸೂರತ್ ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ: ಕನಿಷ್ಠ 7 ಮಂದಿ ಸಾವು
“Vijayapura” ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪದೇ ಪದೇ ಬಾಯ್ಲರ್ ಸ್ಫೋಟಗಳು ಕಂಡುಬಂದಿದೆ ಈ ಘಟನೆಗಳು ಭವಿಷ್ಯದಲ್ಲಿ ಕಾರ್ಖಾನೆಯ ಆರ್ಥಿಕ ಹಾನಿಗೂ ಹಾಗೂ ರೈತರ ವಿಶ್ವಾಸದ ಕ್ಷೇತ್ರದಲ್ಲಿ ನೋವನ್ನು ಬೆಳೆಸಿವೆ ಎಂದು ರೈತರು ಹೇಳುತ್ತಿದ್ದಾರೆ. ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ
ಇದೇ ಕಾರಣಕ್ಕಾಗಿ ಬಾಯ್ಲರ್ ಸ್ಫೋಟ ಪ್ರಕರಣದ & ಅರ್ಥಿಕ ಭ್ರಷ್ಟಾಚಾರ ತನಿಖೆಗಾಗಿ ಸರಕಾರದ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ವಹಿಸಬೇಕು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಾಯ್ಲರ್ ಅನ್ನು 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಎಂಬುದು ತಾಂತ್ರಿಕವಾಗಿ ಅಷ್ಟೇನು ಅನುಭವ ಇಲ್ಲದ ಪುಣೆ ಮೂಲದ ಇಂಜಿನಿಯರಿಂಗ್ ಸಂಸ್ಥೆ ಇದನ್ನು ನಿರ್ಮಿಸಿತ್ತು ಎಂಬ ಆರೋಪ ಬಂದಿದೆ.