ಬಳ್ಳಾರಿ: ನಟ ದರ್ಶನ್ ಸ್ಥಳಾಂತರಕ್ಕೆ ಅಭಿಮಾನಿಗಳ ಜಮಾವಣೆ

ಬಳ್ಳಾರಿ: ನಟ ದರ್ಶನ್ ಅವರ ಬಂಧನ ಮತ್ತು ಸ್ಥಳಾಂತರದಿಂದಾಗಿ ಬಳ್ಳಾರಿಯಲ್ಲಿ ಅಭಿಮಾನಿಗಳು ಜೈಲು ಬಳಿ ಜಮಾಯಿಸುತ್ತಿದ್ದಾರೆ. ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯದಿಂದ ಅನುಮತಿ ದೊರೆತಿದ್ದು, ಈ ಸ್ಥಳಾಂತರ ಬಹುತೇಕ ಇಂದು ಸಂಜೆ ಅಥವಾ ರಾತ್ರಿ ನಡೆಯಲಿದೆ. 
ಇದನ್ನು ಓದಿ: BSNL ಅಕ್ಟೋಬರ್‌ನಿಂದ ದೇಶಾದ್ಯಂತ 4G ಸೇವೆಗಳು ಪ್ರಾರಂಭ

ಈ ಸುದ್ದಿ ತಿಳಿದ ಅಭಿಮಾನಿಗಳು ಮುಂಜಾನೆಯಿಂದಲೇ ಜೈಲು ಬಳಿಗೆ ಆಗಮಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳೂ ಜೈಲು ಬಳಿಗೆ ಬಂದು, ದರ್ಶನ್ ಅವರನ್ನು ನೋಡಲು ಕಾಯುತ್ತಿದ್ದಾರೆ. 

ಪೊಲೀಸರು ಈ ಸಂದರ್ಭದಲ್ಲಿ ಯಾವುದೇ ರೀತಿಯ ನಿಯಂತ್ರಣ ಕ್ರಮ ಕೈಗೊಂಡಿಲ್ಲ. “ದರ್ಶನ್ ಅವರ ಮೇಲೆ ಏನೇ ಆರೋಪ ಇರಲಿ, ಅವರನ್ನು ನೋಡಲು ಬಂದು ಇರುವುದೇ ನಮ್ಮ ಅದೃಷ್ಟ,” ಎಂದು ಅಭಿಮಾನಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *