ಬೆಂಗಳೂರು | ಈದ್-ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಸೆ. 16ರಂದು ರಸ್ತೆ ಸಂಚಾರ ನಿರ್ಬಂಧ
ಬೆಂಗಳೂರು: ಈದ್-ಮಿಲಾದ್ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ ನಡೆಯುವ ಮೆರವಣಿಗೆಗಳಿಂದಾಗಿ ನಗರದ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಗರ ಪೊಲೀಸ್ ಇಲಾಖೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳನ್ನು ವ್ಯವಸ್ಥೆ ಮಾಡಿದ್ದು, ಕೆಲವು ನಿರ್ಬಂಧಿತ ರಸ್ತೆಗಳನ್ನು ತಾತ್ಕಾಲಿಕವಾಗಿ ಜಾರಿಗೊಳಿಸಲಾಗಿದೆ. ವೈ.ಎಂ.ಸಿ.ಎ ಮೈದಾನದಲ್ಲಿ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆಗಳು ಜಿ.ಸಿ. ನಗರ ದರ್ಗಾ, ಶಿವಾಜಿನಗರ, ಯಲಹಂಕ, ಪೀಣ್ಯ, ಲಾಲ್ಬಾಗ್, ಮತ್ತು ನಾಗವಾರ ಮುಂತಾದ ಸ್ಥಳಗಳಿಂದ ವೈ.ಎಂ.ಸಿ.ಎ ಮೈದಾನ ಕಡೆಗೆ ಸಾಗಲಿವೆ….
