ಆಂಧ್ರದ ಇಬ್ಬರು YSRCP ರಾಜ್ಯಸಭಾ ಸದಸ್ಯರು ರಾಜೀನಾಮೆ: TDPಗೆ ಮರಳುವ ಸಾಧ್ಯತೆ

ನವದೆಹಲಿ: ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿಗೆ ಸೇರಿದ ಇಬ್ಬರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾದ ಬೀಡ ಮಸ್ತಾನ್ ರಾವ್ ಜಾಧವ್ ಹಾಗೂ ವೆಂಕಟರಮಣ ರಾವ್ ಮೋಪಿದೇವಿ ಅವರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಅದು ಅಂಗೀಕಾರಗೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Online Passport Portal: ಪಾಸ್ಪೋರ್ಟ್ ಸೇವಾ ಪೋರ್ಟಲ್ ಮುಂದಿನ 5 ದಿನಗಳ ಕಾಲ ಸ್ಥಗಿತ

ಮಸ್ತಾನ್ ರಾವ್ ಅವರ ಅವಧಿ 2028ಕ್ಕೆ ಕೊನೆಗೊಳ್ಳಬೇಕಾಗಿತ್ತು, ಆದರೆ ಈಗ ಅವರು ಟಿಡಿಪಿಗೆ ಮರಳುವ ಸಾಧ್ಯತೆ ಇದೆ. ಮೋಪಿದೇವಿ ಅವರ ಅವಧಿ 2026ಕ್ಕೆ ಕೊನೆಗೊಳ್ಳುವದು, ಮತ್ತು ಅವರೂ ಟಿಡಿಪಿ ಸೇರುವ ಸಾಧ್ಯತೆಗಳಿವೆ ಎಂಬ ಮಾಹಿತಿ ಬಂದಿದೆ.

Leave a Reply

Your email address will not be published. Required fields are marked *