ಅಂಚೆ ಇಲಾಖೆ 50 ಪೈಸೆ ಹಿಂದಿರುಗಿಸದ ಪ್ರಕರಣ: ಗ್ರಾಹಕನಿಗೆ ₹10 ಸಾವಿರ ಪರಿಹಾರ ನೀಡುವಂತೆ ಗ್ರಾಹಕ ಆಯೋಗ

ಚೆನ್ನೈ: ಅಂಚೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಗ್ರಾಹಕನಿಗೆ 50 ಪೈಸೆಯನ್ನು ಹಿಂದಿರುಗಿಸದ ಪ್ರಕರಣದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹10,000 ಪರಿಹಾರವನ್ನು ಪಾವತಿಸುವಂತೆ ಭಾರತೀಯ ಅಂಚೆ ಇಲಾಖೆಗೆ ಸೂಚಿಸಿದೆ. ಈ ಪ್ರಕರಣದಲ್ಲಿ, 2023ರ ಡಿಸೆಂಬರ್ 13ರಂದು ಚೆನ್ನೈನ ಪೊಜಿಚಲೂರ್ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ ಲೇಟರ್ ಖರೀದಿಸಿದ ಮನಶಾ ಅವರಿಗೆ ₹29.50 ರಶೀದಿಯೊಂದಿಗೆ ₹30 ಪಾವತಿಸಲಾಗಿತ್ತು. ಯುಪಿಐ ಮೂಲಕ ಪಾವತಿಸಲು ಮನಶಾ ಅವರು ಸಿದ್ಧರಿದ್ದರು, ಆದರೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಸಿಬ್ಬಂದಿ ಅದನ್ನು ನಿರಾಕರಿಸಿದರು. ಇದರಿಂದ ಕೋಪಗೊಂಡ ಮನಶಾ ಅವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣವನ್ನು ಪರಿಶೀಲಿಸಿದ ಆಯೋಗ, 50 ಪೈಸೆಯನ್ನು ಮರುಪಾವತಿಸುವುದರ ಜೊತೆಗೆ, ಗ್ರಾಹಕನಿಗೆ ₹10 ಸಾವಿರ ಮಾನಸಿಕ ಒತ್ತಡಕ್ಕೆ ಪರಿಹಾರ ಮತ್ತು ₹5 ಸಾವಿರ ವ್ಯಾಜ್ಯ ಶುಲ್ಕವಾಗಿ ಪಾವತಿಸಲು ಸೂಚನೆ ನೀಡಿದೆ.

Leave a Reply

Your email address will not be published. Required fields are marked *