ಜೆಡಿಎಸ್ ಪಕ್ಷದ ಮುಖಂಡ ಎಚ್. ಡಿ. ರೇವಣ್ಣ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ಅವರು ಸಲ್ಲಿಸಿದ್ದ ಅರ್ಜಿ ವಜಾ ಆಗಿರುವ ಹಿಂದೆಯೇ ಎಸ್.ಐ.ಟಿ. ಅಧಿಕಾರಿಗಳು ಬೆಂಗಳೂರಿನ ಪದ್ಮನಾಭ ನಗರದ ಅವರ ನಿವಾಸದಿಂದ ಬಂಧಿಸಿದ್ದಾರೆ. ಸಂತ್ರಸ್ಥೆಯ ಮಗ ಮೈಸೂರಿನ ಕೆ.ಆರ್. ನಗರದ ಪೊಲೀಸ್ ಠಾಣೆಯಲ್ಲಿ ತಾಯಿಯ ಅಪಹರಣವಾಗಿದೆಯೆಂದು ದೂರು ನೀಡಿದ್ದರು. ಎಪ್ರಿಲ್ 29 ರಂದು ಸಂತ್ರಸ್ಥೆಯನ್ನು ಅಪಹರಿಸಿ ರೇವಣ್ಣನ ಆಪ್ತ ಸಹಾಯಕ ರಾಜಶೇಖರನ ತೋಟದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಸಂತ್ರಸ್ಥೆಯನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
2024-05-05